ಚೈತ್ರ

ಹನಿ ಹನಿ ಬೆವರಿಳಿದ ಹನಿ
ಮನಸ್ಸು ಅಂವ ಹೊರಟಿದ್ದಾನೆ
ಸುಡು ಬಿಸಿಲಿನಲಿ ತುಸುವೇ ದೂರ.
ಯಾರೋ ದುಂಬಾಲು ಬಿದ್ದು
ಬೆನ್ನಟ್ಟಿದವರ ಹಾಗೆ ನಡು ಮಧ್ಯಾಹ್ನದಲಿ.

ಟ್ರಕ್‌ಗಳು ಬಸ್ಸುಗಳು ದಾರಿಯಲಿ
ಹಾಯ್ದು ಹೋಗುತ್ತವೆ ಬಿಸಿಲು ಗುದುರೆಯ
ತಿಳಿ ತಿಳಿ ಜಲದ ಬಿಂಬದಲಿ ಯಾವುದೋ
ಊರು ಯಾರೋ ಸಂಬಂಧಿಕರ ನೆನಪಿನಲಿ,
ಸೂರ್ಯನ ಯಾತ್ರೆ ಸಾಗಿದೆ ದಾರಿಗುಂಟ.

ಸೀಮೆಎಣ್ಣೆ ಹಾಕಿ ಹತ್ತಿಸಿದ
ಒಲೆಯ ಮೇಲೆ ಕಾದ ಹಂಚಿನಲಿ,
ಸೂರ್ಯ ತೆಳು ತೆಳು ರೊಟ್ಟಿಯಾಗಿ
ಮೇಲೇಳುತ್ತಿದ್ದಾಳೆ ಅವ್ವ ಬೆನ್ನಗುಂಟ ಇಳಿದ
ಬೆವರ ಸ್ನಾನ ಎದೆಯ ಬದುವನ್ನೆಲ್ಲಾ ತೋಯಿಸಿದೆ.

ಬಿಸಿ ಕಿರಣಗಳು ಮೈ ಸವರುತ್ತವೆ.
ಒಳಗೂ ಹೊರಗೂ ಅತ್ತ ಇತ್ತ ಕಾಲದ ಚಲನೆ.
ಜೀವನ ಹರಿದು ಮೋಡಗಳ ಗುರಾಣೆ ಹಿಡಿದ ಸೂರ್ಯ,
ಪ್ರತಿಶಬ್ದಗಳ ಸಾಲುಗಳಿಗೆ ಸರಿದ ಕವಿತೆ,
ಭಾಷೆಯ ಸೆಳವಿನಲಿ ಅರಳಿದ ಗುಲ್‌ಮೋಹರ್‍,
ಯಾವ ಗುಟ್ಟೂ ರಟ್ಟು ಮಾಡಿಲ್ಲ ಗಿಡಮರಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೭೦
Next post ಮಾನಸ ವೀಣ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys